ನಾನಾ ಭಾಯ್|,ನಾನಿ ಪಾಲ್ಖಿವಾಲ, 'ಟಾಟಾ ಸಂಸ್ಥೆ'ಯಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದ ಒಬ್ಬ ಸಮರ್ಥ ಜ್ಯೂರಿ, ಮತ್ತು ಕಾನೂನು ಸಲಹೆಗಾರರಾಗಿ, ಮುಂಬೈನ ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ ಕಾನೂನಿನ ನೆರವು ನೀಡುತ್ತಿದ್ದರು. ಅವರೊಬ್ಬ ಅತ್ಯಂತ ಪ್ರಭಾವೀ ಮಾತುಗಾರರಾಗಿದ್ದರು. ಅವರು ಹುಟ್ಟಿ-ಬೆಳೆಸಿದ, ಫೋರಂ ಆಫ್ ಪ್ರಿ ಎಂಟರ್ ಪ್ರೈಸೆಸ್' ಸಂಸ್ಥೆಯ ವತಿಯಿಂದ, ಪ್ರಿತಿವರ್ಷವೂ 'ಲೋಕ ಸಭೆ'ಯಲ್ಲಿ 'ಬಡ್ಜೆಟ್' ಮಂಡಿಸಿದ ಮಾರನೆಯದಿನದಂದು ಮುಂಬೈನ ಬ್ರೊಬೋರ್ನ್ ಸ್ಟೇಡಿಯಂ ನ ವೇದಿಕೆಯಲ್ಲಿ ತಮ್ಮ ಬಡ್ಜೆಟ್ ವಿಶ್ಲೇಷಣೆ ಯನ್ನು ಮಂಡಿಸುತ್ತಿದ್ದರು. ಅದನ್ನು ಕೇಳಲು 'ಬೊಂಬಾಯಿನ ಪ್ರತಿಷ್ಠಿತ ನಾಗರಿಕರು', 'ಯೋಜನಾ ಅಧಿಕಾರಿಗಳು' ಮತ್ತು 'ಉದ್ಯೋಗ-ಪತಿ'ಗಳು ಸ್ಟೇಡಿಯಂ ಹೊರಗೆ ಕಿಕ್ಕಿರಿದು ನೆರೆಯುತ್ತಿದ್ದರು. == ನಾನಿ ಪಾಲ್ಖಿವಾಲ ಟ್ರಸ್ಟ್ ಸ್ಥಾಪನೆ == ಟ್ಯಾಕ್ಸೇಶನ್ ಲಾ ಮತ್ತು ಭಾರತದ ಸಂವಿಧಾನದ ಬಗ್ಗೆ ತಿಳಿದ್ದಿದ್ದ ಪಾಲ್ಕಿವಾಲರ ಆದರ್ಶ ಹಾಗೂ ಅವರ ಕಾರ್ಯಗಳನ್ನು ಮುಂದುವರೆಸಲು ಸ್ಮರಣಾರ್ಥವಾಗಿ ೨೦೦೪ ರಲ್ಲಿ ಸ್ಥಾಪನೆಯಾಯಿತು. ಟ್ರಸ್ಟಿಗಳ ವಿವರ ಹೀಗಿದೆ : ವೈ.ಎಚ್.ಮಲೇಗಾಮ್ (ಅಧ್ಯಕ್ಷರು) ಎಫ್.ಕೆ.ಕವರನ, ಬನ್ಸಿ ಎಸ್.ಮೆಹ್ತ ದೀಪಕ್ ಎಸ್.ಪರೇಖ್, ಎಚ್.ಪಿ.ರೈನ, ಸೋಲಿ ಜೆ. ಸೋರಾಬ್ಜಿ, ಎಸ್.ಕೆ.ಭಾರುಚ (ಟ್ರಸ್ಟಿ, ಮತ್ತು ಸದಸ್ಯ-ಸೆಕ್ರೆಟರಿ) == ಭಾರತೀಯ ಸಂಸ್ಕೃತಿಯ ಆಳವಾದ ಅರಿವು == 'ಪಾರ್ಸಿ ಮತಸ್ತರಾದ 'ನಾನಿ ಪಾಲ್ಖಿವಾಲಾ,' ರಿಗೆ 'ಭಾರತೀಯ ಮಹಾಕಾವ್ಯಗಳು', 'ಸಂಗೀತ', 'ನೃತ್ಯ'ಗಳ ಬಗ್ಗೆ ಅಪಾರ ಆಸಕ್ತಿ, ಹಾಗೂ ಆಳವಾದ ಜ್ಞಾನವಿತ್ತು. ಶಂಕರ ಭಗವದ್ಪಾದ ರ ಅದ್ವೈತ ಸಿದ್ಧಾಂತ ದ ಬಗ್ಗೆ 'ಮುಂಬೈನ ಭಾರತೀಯ ವಿದ್ಯಾಭವನ,' ಮುಂಬೈನ ಮಾಟುಂಗಾ ಉಪನಗರದಲ್ಲಿರುವ ರಾಮಮಂದಿರದ ವಾರ್ಷಿಕ ಉತ್ಸವ' ಗಳಲ್ಲಿ ಹಾಗೂ ಹಲವೆಡೆಗಳಲ್ಲಿ ಅತ್ಯಂತ ವಿದ್ವತ್ಪೂರ್ಣ ವಿವರಣೆಗಳೊಂದಿಗೆ ಉಪನ್ಯಾಸಗಳನ್ನು ಮಂಡಿಸಿ, ಎಲ್ಲರ ಮನಸ್ಸನ್ನು ಸೆಳೆದಿದ್ದರು. == ನಿಧನ == ೮೨ ವರ್ಷ ವಯಸ್ಸಿನ ನಾನಿ ಪಾಲ್ಖಿವಾಲರು, ತೀವ್ರಕಾಯಿಲೆಯಿಂದ ಬಳಲುತ್ತಿದ್ದು ಡಿಸೆಂಬರ್,೭,೨೦೦೨ ರಂದು ಮುಂಬಯಿನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುಣಮುಖರಾಗದೆ, ಬುಧವಾರ, ಡಿಸೆಂಬರ್, ೧೧, ೨೦೦೨ ರಲ್ಲಿ ಕೊನೆಯುಸಿರೆಳೆದರು. ತಮ್ಮ ಮರಣದ ತರುವಾಯ ತಮ್ಮ ಇಡೀ ದೇಹವನ್ನು ಆಸ್ಪತ್ರೆಗೆ ದಾನಮಾಡುವ ಬಗ್ಗೆ ತಮ್ಮ ಮರಣೋತ್ತರ ಉಯಿಲಿನ ತತ್ಯ : == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ://../. 2015-02-16 ವೇಬ್ಯಾಕ್ ಮೆಷಿನ್ ನಲ್ಲಿ. '']